ಈಗ ಅವನಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ವಿಶ್ವದಲ್ಲಿ ಅತ್ಯಂತ ಗೊಂದಲದಲ್ಲಿರುವ ವ್ಯಕ್ತಿಯೆಂದರೆ ಅವನೇ ಎನ್ನಬಹುದು. ಅವನೆಂದೂ ಇಂತಹ ಸಂದಿಗ್ಧತೆಯಲ್ಲಿ ಸಿಲುಕಿರಲಿಲ್ಲ. ಶ್ರೀಧರ್ ತಾನು ಪ್ರೀತಿಸಿದ ಹುಡುಗಿಯನ್ನು ಬಲಾತ್ಕಾರವಾಗಿ ಎಳೆದುಕೊಂಡು ಹೋಗಿ ಮದುವೆಯಾದಾಗಲೇ ಆಗಲಿ ಅಥವಾ ಸತತವಾಗಿ ತನ್ನ ತಂಗಿಯನ್ನು ಮದುವೆಯಾಗೆಂದು ಪೀಡಿಸಿದಾಗಲೇ ಆಗಲಿ ಇವನ ಮನಸ್ಸು ಇಂದಿನಷ್ಟು ವಿಚಲಿತಗೊಂಡಿರಲಿಲ್ಲ. ಆದರೆ ಕಳೆದ 2-3 ತಿಂಗಳಿನಿಂದ ಆಗುತ್ತಿರುವ ವಿಚಿತ್ರ ವಿದ್ಯಮಾನಗಳನ್ನು ನೋಡಿ ನರಕದಲ್ಲಿರುವಂತೆ ಭಾಸವಾಗುತ್ತಿತ್ತು. ಅವನಿಗೆ ತಾನೀಗ ಸಂತೋಷವಾಗಿರುವೆನೆ ಅಥವಾ ಇಲ್ಲವೇ ಎಂಬುದನ್ನು ಕೂಡ ನಿರ್ಧರಿಸಲಾಗದ ಸ್ಥಿತಿಗೆ ತಲುಪಿದ್ದನು. ಅವನು ಪ್ರೀತಿಸಿದ ಏಕೈಕ ವ್ಯಕ್ತಿ ಶ್ವೇತಾ. ಆದರೆ ಈತನ ನಿರ್ಲಕ್ಷ ಮತ್ತು ಮೂರ್ಖತನದ ಕಾರಣದಿಂದ, ಒಂದು ಸುಂದರ, ಮುಗ್ಧ ಜೀವವೊಂದು ಸುಮಾರು ಒಂದು ವರ್ಷಗಳ ಕಾಲ ಮೃಗ ಮನಸ್ಕರಿಂದ ಅತ್ಯಂತ ಯಾತನೆ ಅನುಭವಿಸಬೇಕಾಯಿತು.
ಶ್ರೀಧರ್ ಮತ್ತು ಇವನ ನಡುವಿನ ತಪ್ಪು ತಿಳುವಳಿಕೆಗಳು, ಭಿನ್ನಾಬಿಪ್ರಾಯಗಳು ಯಾವಾಗಲೋ ಪರಿಹಾರವಾಗಿದ್ದಂತೂ ಸತ್ಯ. ಈಗ ಅವರಿಬ್ಬರ ನಡುವೆ ವೈರತ್ವದ ಛಾಯೆಯೂ ಕೂಡ ಉಳಿದಿಲ್ಲ. ಶ್ವೇತಾಳನ್ನು ವರಿಸುವುದಕ್ಕೆ ಶ್ರೀಧರನಿಂದ ಯಾವ ಅಡ್ಡಿಯೂ ಇರಲಿಲ್ಲ.
ಈ ವಿಚ್ಚೇಧನದ ನಂತರ ಇವನಿಗಿನ್ನೊಂದು ಅವಕಾಶ ಒದಗಿ ಬಂದಿದೆ. ಹೌದು, ಅವನೀಗ ಮತ್ತೆ ಅವಳನ್ನು ಪಡೆಯುವ ಸದಾವಕಾಶ. ಈ ಬಾರಿ ಶ್ರೀಧರನಂತೆ ಅವಳನ್ನು ಕಸಿದುಕೊಳ್ಳುವವರು ಯಾರೂ ಇಲ್ಲ. ಶ್ರೀಧರ್ ಮತ್ತೆ ಇವರ ವಿಷಯದಲ್ಲಿ ತಲೆ ಹಾಕಲಾರ. ಕಾಲ, ಪರಿಸ್ಥಿತಿಗಳು ಇವನ ಪರವಾಗಿಯೇ ಇದ್ದರೂ, ಅದೇಕೋ ಮನವು ಅಳುಕುತ್ತಿದೆ. ನಿಡಿದಾದ ಉಸಿರನ್ನು ಬಿಟ್ಟು ಮತ್ತೆ ಯೋಚನೆಗೆ ಮೊದಲು ಮಾಡಿದ. ಕೆಲವು ದಿನಗಳ ಹಿಂದೆ ವಿಶ್ವೇಶ್ವರರಾಯರು ಬಂದು, ಮದುವೆಯ ವಿಷಯವನ್ನು ಪ್ರಸ್ತಾಪಿಸಿದಾಗ, ಇವನೂ ಸೇರಿದಂತೆ, ಇಬ್ಬರ ಕುಟುಂಬದವರೂ ಒಪ್ಪಿಗೆ ಸೂಚಿಸಿದ್ದರು. ಹತ್ತಿರದ ದಿನಗಳಲ್ಲಿ ಯಾವುದೂ ಒಳ್ಳೆಯ ಮುಹೂರ್ತವಿರದ ಕಾರಣಕ್ಕೆ ಮದುವೆಯನ್ನು ಎರಡು ತಿಂಗಳ ನಂತರ ಮಾಡುವುದೆಂದು ಹಿರಿಯರು ನಿಶ್ಚಯಿಸಿದ್ದರು. ವಾಸ್ತವವಾಗಿ ಅವಳನ್ನು ಹಿಂದಕ್ಕೆ ಪಡೆಯಲು ಸಮಯ ವ್ಯರ್ಥ ಮಾಡಲು ಸಿದ್ಧನಿರಲಿಲ್ಲ. ಆಗ ಭೂಮಿಯ ಮೇಲಿನ ಯಾವುದೇ ಜೀವಿಗಿಂತ ಇವನೇ ಅಧಿಕ ಸಂತೋಷದಲ್ಲಿದ್ದವನಾಗಿದ್ದ ಎಂದರೆ ತಪ್ಪಾಗಲಾರದು.
ಆದರೆ ಅವಳು ಇವನಿಂದ ಆದಷ್ಟು ದೂರವಿರಲು ಶತಪ್ರಯತ್ನ ಮಾಡುತ್ತಿರುವಳೆಂದು ಅವನ ಅಂತರಾಳ ಕೂಗಿ ಕೂಗಿ ಹೇಳುತ್ತಿತ್ತು. ಅವಳು ಹಿಂದಿನಂತೆ ಇವನೆದುರು ಮನಸ್ಸು ಬಿಚ್ಚಿ ಮಾತನಾಡುತ್ತಿರಲಿಲ್ಲ. ಅವಳ ವರ್ತನೆ ಮೊದಲಿನಂತೆ ಮುಕ್ತವಾಗಿರಲಿಲ್ಲ. ಬಹುಶಃ ಅವಳಿಗೆ ಇಷ್ಟವಾಗುತ್ತಿರಲಿಲ್ಲವೇನೋ. ಅವಳ ಸುತ್ತಲಿನ ಪ್ರಪಂಚದೊಂದಿಗೆ ಬೆರೆಯಲಾಗದೆ ತುಂಬಾ ಬದಲಾಗಿದ್ದಳು. ಕೆಲವೊಂದು ಮೂಲವಸ್ತುಗಳು ಹೇಗೆ ಸುತ್ತಲಿನ ಪರಿಸರದೊಂದಿಗೆ ಪ್ರತಿಕ್ರಯಿಸದೆ ಜಡವಾಗಿರುತ್ತಾವೆಯೋ ಹಾಗೆಯೇ ಇವಳಲ್ಲಿ ಯಾವುದೇ ರೀತಿಯ ಚುರುಕಾದ ಚಟುವಟಿಕೆಗಳಿರಲಿಲ್ಲ.
ಆದರೆ ಅವಳು ಇವನಿಂದ ಆದಷ್ಟು ದೂರವಿರಲು ಶತಪ್ರಯತ್ನ ಮಾಡುತ್ತಿರುವಳೆಂದು ಅವನ ಅಂತರಾಳ ಕೂಗಿ ಕೂಗಿ ಹೇಳುತ್ತಿತ್ತು. ಅವಳು ಹಿಂದಿನಂತೆ ಇವನೆದುರು ಮನಸ್ಸು ಬಿಚ್ಚಿ ಮಾತನಾಡುತ್ತಿರಲಿಲ್ಲ. ಅವಳ ವರ್ತನೆ ಮೊದಲಿನಂತೆ ಮುಕ್ತವಾಗಿರಲಿಲ್ಲ. ಬಹುಶಃ ಅವಳಿಗೆ ಇಷ್ಟವಾಗುತ್ತಿರಲಿಲ್ಲವೇನೋ. ಅವಳ ಸುತ್ತಲಿನ ಪ್ರಪಂಚದೊಂದಿಗೆ ಬೆರೆಯಲಾಗದೆ ತುಂಬಾ ಬದಲಾಗಿದ್ದಳು. ಕೆಲವೊಂದು ಮೂಲವಸ್ತುಗಳು ಹೇಗೆ ಸುತ್ತಲಿನ ಪರಿಸರದೊಂದಿಗೆ ಪ್ರತಿಕ್ರಯಿಸದೆ ಜಡವಾಗಿರುತ್ತಾವೆಯೋ ಹಾಗೆಯೇ ಇವಳಲ್ಲಿ ಯಾವುದೇ ರೀತಿಯ ಚುರುಕಾದ ಚಟುವಟಿಕೆಗಳಿರಲಿಲ್ಲ.
ಈ ಒಂದು ವರ್ಷಗಳ ಮಿಥ್ಯನೈಜತೆಯ ನಾಟಕವು ಅವಳ ಮುಗ್ದ ಮನಸ್ಸಿನ ಮೇಲೆ ಅಧಿಕವಾಗಿ ಪರಿಣಾಮ ಬೀರಿರಬಹುದು, ಮತ್ತೆ ಹಿಂದಿನ ಸ್ಥಿತಿಗೆ ಮರಳಲು ಸ್ವಲ್ಪ ಸಮಯ ಬೇಕೇ ಬೇಕು. ಬದಲಾಗುತ್ತಿರುವ ಪರಿಸ್ಥಿತಿಗೆ ಅವಳು ಹೊಂದಿಕೊಳ್ಳಲು ಇನ್ನಷ್ಟು ಸಮಯ ನೀಡಬೇಕೆಂದು ನಿರ್ಧರಿಸಿದ್ದ. ಆಮೇಲೆ ಬೇಕಾದರೆ ಇಬ್ಬರು ಒಟ್ಟಿಗೆ ಕುಳಿತು ಭವಿಷ್ಯದ ನಡೆಗಳ ಬಗ್ಗೆ ಚರ್ಚಿಸಿದರಾಯಿತು ಎಂಬ ತೀರ್ಮಾನಕ್ಕೆ ಬಂದಿದ್ದ. ಅವಳಿಗಾಗಿ ಇವನ ಕಣ್ಣುಗಳು ಹುಡುಕುತ್ತಿದ್ದವು. ಮಾವಿನ ಮರದ ಕೆಳಗೆ ಒಂಟಿಯಾಗಿ ಕುಳಿತಿದ್ದ ಶ್ವೇತಾಳನ್ನು ಕಂಡೊಡನೆಯೇ ಓಡಿಹೋಗಿ ಅವಳೆದುರು ಹೋಗಿ ಮೊಣಕಾಲೂರಿ ಕುಳಿತುಕೊಂಡ.
ತಮ್ಮಿಬ್ಬರನ್ನು ಇನ್ನೊಂದು ಜೊತೆ ಕಣ್ಣುಗಳು ಎಲೆಗಳ ಮರೆಯಿಂದ ಗಮನಿಸುತ್ತಿವೆ ಎಂಬುದು ಅವರಿಗಾಗ ತಿಳಿಯುವಂತಿರಲಿಲ್ಲ. ಆ ಕಣ್ಣುಗಳಿಂದ ಎರಡು ಹನಿಗಳು ಎಲೆಗಳ ಮೇಲೆ ಬಿದ್ದು ಜಾರಿ ಮಣ್ಣಿನಲ್ಲಿ ಇಂಗಿ ಹೋದವು. ಶ್ವೇತಾ ತನ್ನೆರಡೂ ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.
ಈ ಎಲ್ಲ ಗೊಂದಲಗಳಿಗೆ, ದುಃಖಕ್ಕೆ ಕಾರಣ ಭೂತಕಾಲ. ಇಂದು ರೆಕ್ಕೆ ಮುರಿದು ನೆಲಕ್ಕೆ ಬಿದ್ದಿವೆ ಚಿಟ್ಟೆಗಳು. ಈ ಪಕ್ಷಿಗಳ ಪ್ರೇಮದ ಉತ್ತುಂಗದ ದಿನಗಳು ಗತಕಾಲದಲ್ಲಿದೆ....
ಈ ಎಲ್ಲ ಗೊಂದಲಗಳಿಗೆ, ದುಃಖಕ್ಕೆ ಕಾರಣ ಭೂತಕಾಲ. ಇಂದು ರೆಕ್ಕೆ ಮುರಿದು ನೆಲಕ್ಕೆ ಬಿದ್ದಿವೆ ಚಿಟ್ಟೆಗಳು. ಈ ಪಕ್ಷಿಗಳ ಪ್ರೇಮದ ಉತ್ತುಂಗದ ದಿನಗಳು ಗತಕಾಲದಲ್ಲಿದೆ....